Monday, 22 February 2016

ಮಗು 

ಮನದ ಖಾವ ಆರಿಸಿ
ಮೊಗದಿ ನಗುವ ಅರಳಿಸಿ
ಜೀವಸೆಲೆಯ ಮರಳಿಸೋ
ಮಗುವೆ ನಿನಗೆ ವಂದನೆ !

Friday, 19 February 2016


ವಿಮರ್ಶಕ

ರವಿ ಕವಿ ಕುಡುಕ
ಕಾಣದನ್ನು ಕಂಡು
ಹಿಡಿಯುವನನ್ನು
ವಿಮರ್ಶಕ ಎನ್ನುತಾರೆ !
ವೆಂಕಟ in ಸಂಕಟ 

ಸಂಕಟ ಬಂದಾಗ
ವೆಂಕಟರಮಣ
ಚುನಾವಣೆ ಬಂದಾಗ
ಧರಿದ್ರ ನಾರಾಯಣ !
ಅವನು ಇವನು 

ಅವನು ಬರೆವುದನ್ನು ಆಸೆಯಿಂದ
ಓದುವ ಇವನು ಅವನನ್ನು
ಕವಿಯಾಗಿಸುತ್ತಾನೆ !

ಅವನಿಗಾಗೇ  ಬರೆದುಕೊಳ್ಳುತ್ತಿದ್ದ
ಇವನು ಅ೦ದಿನಿಂದ ಇವನಿಗಾಗಿ
ಬರೆಯಲಾರಂಭಿಸುತ್ತಾನೆ !

ಅವನಿವನ ಮಧ್ಯೆ
ಪ್ರೇಮಾ೦ಕುರವಾಗಿ
ಪದ್ಯ ಹುಟ್ಟುತ್ತದೆ !

Wednesday, 10 February 2016

ಬೆಳಕೆಂಬ ಬ್ರಮೆ 

ಕತ್ತಲಲಿ ಗುಮ್ಮ ಬರುವನು
ಎನ್ನುತಿದ್ದಳು ಅಮ್ಮ !
ನನಗೆ ಅದಕೆ ಏನೋ
ಕತ್ತಲೆಂದರೆ ಇಂದಿಗೂ ಭಯ !
ಬೆಳಕು ಕತ್ತಲನೋಡಿಸುವುದು
ಎಂಬುದು ಬರೀ ಸುಳ್ಳು !
ಎಷ್ಟೋ ಬಾರಿ ಕತ್ತಲೇ ಬೆಳಕನ್ನು
ಓಡಿಸಿದ್ಡೂ  ಉಂಟು !
ಕತ್ತಲೇ ಶಾಶ್ವತ
ಅದೂ ಸಾವಿನಂತೆ ನಿಶ್ಚಿತ !
ನಮ್ಮ ತೊಳಲಾಟ ಹುಡುಕಾಟಗಳೆಲ್ಲವೂ
 ಕತ್ತಲನು ಕೊಂಚ ದೂರವಿಡುವುದರಲ್ಲೇ
ಕಳೆಯುತ್ತಿದೆ ನಮಗೂ
ವಯಸ್ಸಾಗುತ್ತಿದೆ  !
ಕಂಡದ್ದು ಬೆಳಕು ಕಾಣದ್ದು ಕತ್ತಲೆ
ಮಧ್ಯೆ ಸಿಲುಕಿದೆ  ಬದುಕು !
ಒಂದು ದಾರಿ 

ಕವಿತೆ ಬರೆದೆನೆ೦ದ ಮಾತ್ರಕ್ಕೆ
ನಾ ಕವಿಯಲ್ಲ ಕವಿಯಾಗ
ಬಯಸುವುದೂ ಇಲ್ಲ !
ನನ್ನೆದೆಯ ಮಿಡಿತ ಮತ್ತು
ತಲೆಯ ಕೊರೆತಗಳ ಸ೦ಬಾಳಿಸಲಿಕ್ಕೆ
ನನಗಿರುವ ಒ೦ದು ದಾರಿ

ಇದು !

Saturday, 6 February 2016

ಬುದ್ಧಿವಂತರು

ಬುದ್ದಿವಂತರು ಮನೆ ಮಟ
ಮಾಡಿಕೊಳ್ಳುತ್ತಾರೆ
ದಡ್ಡರು ಕವಿತೆ ಕವನಗಳ
ಕಟ್ತುತಾರೆ !
ಹಸ್ತಾಂತರ 

ಎದೆಯ ಭಗೆದರೂ ಹಸಿರ
ಚಿಮ್ಮುವ ಭೂಮಿ
ತನ್ನ ಮಕ್ಕಳಿಗೂ ಅದೇ
ಗುಣವನ್ನು ಹಸ್ತಾಂತರಿಸಿದೆ  !