ಬಾನಾಡಿ
Thursday, 1 March 2018
ಹಸಿದವನ ಕೊಲೆ
ಹಸಿವೆಯನ್ನು ಕೊಲ್ಲಲಾಗದ ಸಮಾಜ
ಹಸಿದವನನ್ನು ಕೊಲ್ಲುತ್ತದೆ !
ಸತ್ತವನನ್ನು ದೇವರು ಮಾಡಿ
ಬದುಕಿದವನು ಕೇವಲನಾಗುತ್ತಾನೆ !
ಕೂಪಮಂಡೂಕ
ಕಾರವಾರದ ಕೂಪಮಂಡೂಕನಿಗೆ
ಭಾರತದ ಇತಿಹಾಸವೆಲ್ಲಾ ಕರತಲಾಮಲಕ
ಅವನ ಯೋಗ್ಯತೆಗೆ ನಾಡಿನ ಭಾಷೆಯ
ಬೇರು ಮತ್ತು ಎಳೆಗಳು ಮಾತ್ರ ನಿಲುಕವು !
#
Anathkumar Hedge #
ಋಣ
ಸಾಲ ಮಾಡಿದವರು
ಓಡಿ ಹೋಗುತ್ತಾರೆ ....
ತಪ್ಪು ಮಾಡಿದವರು
ಖುಲಾಸೆಯಾಗುತ್ತಾರೆ ....
ಅಡ್ಡಿಯಿಲ್ಲ
ಆದರೆ
ನಮ್ಮ ಮಧ್ಯೆ ಇದ್ದುಕೊಂಡು
ನಮಗಾಗಿ ಹೋರಾಡಿದ
ಕೆ ಸ್ ಪುಟ್ಟಣಯ್ಯ ನಂತವರು
ಇಷ್ಟು ಬೇಗ ಋಣ ಹೊರಿಸಿ
ಹೊರಟು ಬಿಡುವುದು
ಏಕೆ ???
# RIP ...K S Puttanaiah #
ಧರ್ಮ ದರ್ಶನ
ಎಲ್ಲರೂ ಕಾಸು ಕೊಟ್ಟು
ಹೋದರು ವಿಶೇಷ ದರ್ಶನಕ್ಕೆ
ನಾನೂ ಅವರ ಹಿಂಬಾಲಿಸಿದೆ ...
ಜನ ಮರುಳೋ
ಜಾತ್ರೆ ಮರುಳೋ
ಗೊತ್ತಿಲ್ಲ !
ಧರ್ಮ ದರ್ಶನದ ಹಾದಿ ಸುಗಮವಾಗಿತ್ತು
ಕಾಸು ಕೊಟ್ಟವರ ಪಾಡು ನೋಡಬೇಕಿತ್ತು
ನಾನು ಕೊಟ್ಟ ದುಡ್ಡಿಗೆ ಅಷ್ಟು ರಂಜನೆ ಸಾಕಾಯ್ತು !
ಯಾರು ಹೆಚ್ಚು ?
ಯಾರು ಹೆಚ್ಚು ? ಯಾರು ಕಡಿಮೆ ?
ಕಡೆಗೆ ಉಳಿವುದೊಂದೆ - ಒಲುಮೆ
ಕೊಟ್ಟು ಕೊಟ್ಟು ಹಗುರವಾಗು
ಪಡೆದು ಪಡೆದು ಧನ್ಯನಾಗು !
ಉರಿವ ಧರೆ
ನೀರ ಎರಚಿ
ಉರಿವ ಧರೆಯ ತಣಿಸಬಹುದೇ ?
ಮಣ್ಣ ತೂರಿ
ಜಗದ ಕಣ್ಣ ಮುಚ್ಚಬಹುದೇ ?
ನೆತ್ತರಲಿ ಬರೆದ ಪದ್ಯ
ಹಾಡಾಗಬಹುದೇ ?
ಓರೆ ಕೋರೆಗಳಿಗೆ ನಕ್ಕಿದ್ದು
ಮಂದಹಾಸವಾಗುವುದೇ ?
ತನ್ನ ತಾನರಿದುಕೊಂಡು
ಹಗುರವಾಗಬಹುದೇ ?
Newer Posts
Older Posts
Home
Subscribe to:
Posts (Atom)