Tuesday, 22 March 2016

ಖಾಲಿಯಾದೆ

ಆವಳು ನಕ್ಕಾಗ ಹಿಗ್ಗಿದೆ
ಅತ್ತಾಗ ಕುಗ್ಗಿದೆ
ಸಿಟ್ಟಾದಾಗ ನಕ್ಕೆ
ಸುಮ್ಮನಿದ್ದಾಗ
ಕಳವಳಗೊ೦ಡೆ
ಮಾತುಬಿಟ್ಟಾಗ
ಮ್ಲಾನನಾದೆ
ಈಗೋ ಅವಳ
ಸುಳಿವಿಲ್ಲ ?
ನಾ ಖಾಲಿಯಾದೆ!


Monday, 14 March 2016

ತುಂಬೆ ಗಿಡಗಳ ಊರು


ನಮ್ಮೂರೆ೦ದರೆ
ಕಲ್ಪತರುಗಳ ಊರು
ಸಿದ್ದಗಂಗೆಯ ತೇರು
ಕಲಾವಿದರ ತವರು !

ನಮ್ಮೂರೆ೦ದರೆ
ತ್ರಿವಿದ ದಾಸೋಹಿ
ಮಹಾಭಿಕ್ಷು
ದೊದ್ದಬುದ್ದೇರು.

ನಮ್ಮೂರೆ೦ದರೆ
ಕಾಡು ಕುರುಚಲು
ಬಯಲು ಸೀಮೆಗೆ 
ಹೆಬ್ಬಾಗಿಲು !

ನಮ್ಮೂರೆ೦ದರೆ
ಕಲ್ಲು ಬಂಡೆಗಳಿಗೆ
ಜೀವ ಕೊಟ್ಟ
ಡ೦ಕಣ ಚಕಣರು !

ನಮ್ಮೂರೆ೦ದರೆ
ಅಣುವಿನಲ್ಲಿ ಪ್ರಖಾಂಡ
ಶಕ್ತಿಯನು  ಕಂಡ
ರಾಜಾ ರಾಮಣ್ಣರು !

ನಮ್ಮೂರೆ೦ದರೆ
ಆನೆ ಕುದುರೆಯ
ರಂಗಕ್ಕೆ ಪರಿಚಯಿಸಿದ
ಗುಬ್ಬಿ ವೀರಣ್ಣೊರು !

ಅಷ್ಟೇ ಅಲ್ಲ ಇರಿ
ನಮ್ಮೂರೆ೦ದರೆ
ಹೊಗೆಯಾಡುವ ತಟ್ಟೆ ಇಡ್ಲಿ
ತುಪ್ಪದ ರಾಗಿ ಬಿಸ್ಕೇಟು
ಅಕ್ಕಿ ರೊಟ್ಟಿ ಅವರೇಕಾಯಿ ಉಸ್ಲಿ !

ನಮ್ಮೂರೆ೦ದರೆ
ಕಲ್ಪತರುಗಳ ಊರು
ಸಿದ್ದಗಂಗೆಯ ತೇರು
ಕಲಾವಿದರ ತವರು !














Saturday, 5 March 2016


ಮಂಕುತಿಮ್ಮನ ಮಾಡಿದರು !

ಹೌದುರಿ 
ಇವರು ಲೀಡರು 
ರೈತಚಳುವಳಿಯಿಂದ  
ಬಂದವರು 
ಉಳುಮೆ ಬಿಟ್ಟವರು
ಚಳುವಳಿಗೆ ಕೈ ಕೊಟ್ಟರು  !

ಮತ್ತಿವರು  
ಲೋಹಿಯಾರ 
ಹೆಸರೇಳಿ 
ಬಂದರು ದುಂದು 
ವೆಚ್ಚ ಮಾಡಿದರು
ಸಬೂಬು ಕೊಟ್ಟರು  !

ಇನ್ನಿವರು 
ಜಮೀನುಧಾರರ 
ವಿರೋಧಿಸಿದವರು 
ತಾವೇ ಆಯಕಟ್ಟಿನಲ್ಲಿ 
ಜಮೀನು ಮಾಡಿ 
ಮಾರಿದರು !

ಮತ್ತವರು 
ಧಾರ್ಮಿಕರು 
ಗುಡಿಯ ಕೆಡವಿದರು 
ಮಸೀದಿಯ ಒಡೆದರು 
ಇಗರ್ಜಿಗೆ ಕಲ್ಲು ಎಸೆದರು !

ಇನ್ನು "ಈಗಿನವರು" 
ಮೆಲಿನವರನೆಲ್ಲ 
ತೆಗಳಿ ನಮ್ಮನ್ನು 
ಮಂಕುತಿಮ್ಮರನ್ನಾಗಿ 
ಮಾಡುವವರು !