http://epaper.vishwavani.news/bng/tshare/bng/23-04-2017/17/Vishwavani-ALL-23042017-1723042017102309.gif
Friday, 28 April 2017
Saturday, 22 April 2017
ಏನೆನ್ನಬೇಕು ?
ಗಿಣಿಯನು
ಪಂಜರದೊಳಿಟ್ಟು
ಅನ್ನ ನೀರು
ಕೊಟ್ಟು ಬಿಟ್ಟು
ಧನ್ಯತೆಯ ಅನುಭವಿಸುವವರನು
ಏನೆನ್ನಬೇಕು ?
ಕಣ್ಣುಗಳಿಗೆ
ಬಟ್ಟೆ ಕಟ್ಟಿ
ಕತ್ತಲಲ್ಲಿ
ಓಡ ಬಿಟ್ಟು
ಕೆಟ್ಟ ಸುಖವ
ಸುಖಿಸೊ ಮನವ
ಏನೆನ್ನಬೇಕು ?
ಬೆಳ್ಳಂಬೆಳ್ಗೆ
ವೇಷ ತೊಟ್ಟು
ಒಳಿತು ಕೆಡುಕು
ಗ್ರಹಕೆ ಕೊಟ್ಟು
ಕಾಸು ಮಾಡುವವರ
ಏನೆನ್ನಬೇಕು ?
ಎಲ್ಲದನ್ನೂ
ಕೂಡಿ ಕಳೆದು
ತಾನು ತಿನ್ನಲಷ್ಟೆ ದುಡಿದು
ಮರುಗಲೊಲ್ಲ
ಕೊರಡು ಮನವ
ಏನೆನ್ನಬೇಕು ?
ಕೇಳಿದರೂ ಕೇಳದಂತೆ
ಕಾಣಿಸಿದ್ದೂ ಕಾಣದಂತೆ
ಎದಿರು ಗೊಂಡಾಗ
ಹುಸಿನಗುವ
ವಿದೂಷಕರನು
ಏನೆನ್ನಬೇಕು ?
ಪಂಜರದೊಳಿಟ್ಟು
ಅನ್ನ ನೀರು
ಕೊಟ್ಟು ಬಿಟ್ಟು
ಧನ್ಯತೆಯ ಅನುಭವಿಸುವವರನು
ಏನೆನ್ನಬೇಕು ?
ಕಣ್ಣುಗಳಿಗೆ
ಬಟ್ಟೆ ಕಟ್ಟಿ
ಕತ್ತಲಲ್ಲಿ
ಓಡ ಬಿಟ್ಟು
ಕೆಟ್ಟ ಸುಖವ
ಸುಖಿಸೊ ಮನವ
ಏನೆನ್ನಬೇಕು ?
ಬೆಳ್ಳಂಬೆಳ್ಗೆ
ವೇಷ ತೊಟ್ಟು
ಒಳಿತು ಕೆಡುಕು
ಗ್ರಹಕೆ ಕೊಟ್ಟು
ಕಾಸು ಮಾಡುವವರ
ಏನೆನ್ನಬೇಕು ?
ಎಲ್ಲದನ್ನೂ
ಕೂಡಿ ಕಳೆದು
ತಾನು ತಿನ್ನಲಷ್ಟೆ ದುಡಿದು
ಮರುಗಲೊಲ್ಲ
ಕೊರಡು ಮನವ
ಏನೆನ್ನಬೇಕು ?
ಕೇಳಿದರೂ ಕೇಳದಂತೆ
ಕಾಣಿಸಿದ್ದೂ ಕಾಣದಂತೆ
ಎದಿರು ಗೊಂಡಾಗ
ಹುಸಿನಗುವ
ವಿದೂಷಕರನು
ಏನೆನ್ನಬೇಕು ?
Friday, 21 April 2017
ಅಸಹಾಯಕ ಕವಿ
ಯಾರ ಸಹಾಯವೂ
ಇಲ್ಲದೆಯೇ
ಬದುಕು ಕಟ್ಟಿಕೊಳ್ಳುವ
ಸ್ವಾಭಿಮಾನಿ ಕವಿ,
ಅಸಹಾಯಕ
ಕವನಗಳ ಬರೆದಾಗ
ಸಹೃದಯರ ಸಹಾನುಭೂತಿಗೂ
ಸಂಗಾತಿಯ ಕೆಂಗಣ್ಣಿಗೂ
ಒಮ್ಮೆಗೇ ಗುರಿಯಾಗುತ್ತಾನೆ 😊
ಇಲ್ಲದೆಯೇ
ಬದುಕು ಕಟ್ಟಿಕೊಳ್ಳುವ
ಸ್ವಾಭಿಮಾನಿ ಕವಿ,
ಅಸಹಾಯಕ
ಕವನಗಳ ಬರೆದಾಗ
ಸಹೃದಯರ ಸಹಾನುಭೂತಿಗೂ
ಸಂಗಾತಿಯ ಕೆಂಗಣ್ಣಿಗೂ
ಒಮ್ಮೆಗೇ ಗುರಿಯಾಗುತ್ತಾನೆ 😊
Thursday, 20 April 2017
ಅರ್ಥವಿರದ ಕವಿತೆ
ಹಿತ್ತಲಗಿಡ
ಮದ್ದಲ್ಲ
ಪ್ರೊಫೆಸರ್ ಮಕ್ಳು
ಒದಲ್ಲ !
ಬುದ್ಧಿವಂತರು ಬಾಯಿ
ಬಿಡಲ್ಲ
ದಡ್ದನನ್ನ ಮಕ್ಳು
ಮುಚ್ಚಲ್ಲ !
ಕಮ್ಯುನಿಸ್ಟರು
ಅಳಲ್ಲ
ಕಾರ್ಟೂನಿಷ್ಠರು
ನಗಲ್ಲ !
ಕಾವ್ಯ ಮತ್ತು ಖಡ್ಗ !
ಕಾವ್ಯ ಸೃಷ್ಠಿಯ ಸುಗ್ಗಿ
ಭಾವನೆಗಳ ಸ್ಪುರಣ
ಎಂಬ ಕಾಲವೊಂದಿತ್ತು
ನಂತರ , ಕಾವ್ಯ ಬುದ್ದಿಯ
ವ್ಯಾಕರಣವಾಯ್ತು
ಕಾವ್ಯ ಖಡ್ಗವಾಗಬೇಕು
ಎಂಬ ಮತ್ತೊಂದು ಕಾಲವಿತ್ತು
ಈಗಂತೂ ಕಾವ್ಯ ಚೆನ್ನಾಗಿರಬೇಕು
ಇಲ್ಲ software ಇಂಜಿನಿಯರ್
ಆಗಿರಬೇಕು ಅಂತಾರೆ ನೋಡಿ 😊
ಭಾವನೆಗಳ ಸ್ಪುರಣ
ಎಂಬ ಕಾಲವೊಂದಿತ್ತು
ನಂತರ , ಕಾವ್ಯ ಬುದ್ದಿಯ
ವ್ಯಾಕರಣವಾಯ್ತು
ಕಾವ್ಯ ಖಡ್ಗವಾಗಬೇಕು
ಎಂಬ ಮತ್ತೊಂದು ಕಾಲವಿತ್ತು
ಈಗಂತೂ ಕಾವ್ಯ ಚೆನ್ನಾಗಿರಬೇಕು
ಇಲ್ಲ software ಇಂಜಿನಿಯರ್
ಆಗಿರಬೇಕು ಅಂತಾರೆ ನೋಡಿ 😊
ಅಸಹಾಯಕ
ಬಿಸಿಲು ಬೆಳಕಿರದಿದ್ದರೆ
ನಿನ್ನ ನೆರಳೂ ನಿನ್ನ
ಹಿಂಬಾಲಿಸುವುದಿಲ್ಲ
ಹೀಗೆ
ಅಸಹಾಯಕ ಕವನಗಳ
ಬರೆವುದರಿಂದ ನನ್ನ
ಪಾರುಮಾಡುವವರಿಲ್ಲ !
ನಿನ್ನ ನೆರಳೂ ನಿನ್ನ
ಹಿಂಬಾಲಿಸುವುದಿಲ್ಲ
ಹೀಗೆ
ಅಸಹಾಯಕ ಕವನಗಳ
ಬರೆವುದರಿಂದ ನನ್ನ
ಪಾರುಮಾಡುವವರಿಲ್ಲ !
Saturday, 15 April 2017
ತೀರದ ತಾಕಲಾಟ
ಸಮುದ್ರದ
ಅಲೆಗಳ ಏರಿಳಿತ
ತೀರದ ತಾಕಲಾಟವಷ್ಟೆ
ಒಮ್ಮೆ ಒಳನುಗ್ಗಿ
ಪಾರಾಗಿಬಿಟ್ಟರೆ
ಕಣ್ಣು ಕೊರೈಸುವಷ್ಟೂ
ಸಾಗರ !
ಮನುಷ್ಯ ಜೀವನವೂ ಹಾಗೆಯೇ !
ಅಲೆಗಳ ಏರಿಳಿತ
ತೀರದ ತಾಕಲಾಟವಷ್ಟೆ
ಒಮ್ಮೆ ಒಳನುಗ್ಗಿ
ಪಾರಾಗಿಬಿಟ್ಟರೆ
ಕಣ್ಣು ಕೊರೈಸುವಷ್ಟೂ
ಸಾಗರ !
ಮನುಷ್ಯ ಜೀವನವೂ ಹಾಗೆಯೇ !
solve ಎಂಟು !
ಸೈಂಟಿಸ್ಟ್ ಗಳು ಹೇಳುವರು
"ನೀರು ಯುನಿವರ್ಸಲ್" ಸಾಲ್ವೆಂಟು
ಕಾರಣ ಅದು
ಹಲವಾರು ವಸ್ತುಗಳನ್ನು
ಕರಗಿಸುವುದುಂಟು...
ಕುಡುಕನಿಗೆ ಆಲ್ಕೋಹಾಲೇ
"ಅಪರಿಮಿತ ಸಾಲ್ವೆಂಟು" ಏಕೆಂದರೆ ಅವನ ಎಲ್ಲ ನೋವುಗಳನ್ನು ಕರಗಿಸಬಲ್ಲ
ಏಕೈಕ ಶಕ್ತಿ
ಅದಕ್ಕೆ ಮಾತ್ರವೇ ಉಂಟು !
"ನೀರು ಯುನಿವರ್ಸಲ್" ಸಾಲ್ವೆಂಟು
ಕಾರಣ ಅದು
ಹಲವಾರು ವಸ್ತುಗಳನ್ನು
ಕರಗಿಸುವುದುಂಟು...
ಕುಡುಕನಿಗೆ ಆಲ್ಕೋಹಾಲೇ
"ಅಪರಿಮಿತ ಸಾಲ್ವೆಂಟು" ಏಕೆಂದರೆ ಅವನ ಎಲ್ಲ ನೋವುಗಳನ್ನು ಕರಗಿಸಬಲ್ಲ
ಏಕೈಕ ಶಕ್ತಿ
ಅದಕ್ಕೆ ಮಾತ್ರವೇ ಉಂಟು !
ಕನಸುಗಳು
ನನ್ನ ಕನಸುಗಳ ಕದಿಯಬೇಡ
ಆದರಿಂದ ನಿನಗೇ ನಷ್ಟ.
ಅವುಗಳು ಸಾಕಾರಗೊಳ್ಳುವವರೆಗೂ
ನಿನಗೇ ಅಂಟಿಕೊಳ್ಳೋ ಪ್ರಸವದ ಕಷ್ಟ !
ಆದರಿಂದ ನಿನಗೇ ನಷ್ಟ.
ಅವುಗಳು ಸಾಕಾರಗೊಳ್ಳುವವರೆಗೂ
ನಿನಗೇ ಅಂಟಿಕೊಳ್ಳೋ ಪ್ರಸವದ ಕಷ್ಟ !
ಅಂಬೇಡ್ಕರರು
ಆಗರ್ಭ ಶ್ರೀಮಂತಿಕೆಯಿದ್ದರೂ
ಎಲ್ಲವನು ಧಿಕ್ಕರಿಸಿ
ತುಂಡುಬಟ್ಟೆಯುಟ್ಟು
ನಾನೂ
ನಿಮ್ಮಂತಾಗಬಲ್ಲೆನೆಂದು
ಸಾರಿದವರು ಗಾಂಧಿ !
ಬಡತನದಿಂದೆದ್ದು ಬಂದರೂ
ಪಾಂಡಿತ್ಯ ಪಡೆದು
ಸೂಟು ಬೂಟು ತೊಟ್ಟು
ಹಠ ಚಲವಿದ್ದರೆ
ನೀವು ನನ್ನoತಾಗಬಹುದೆಂದು
ವಿಶ್ವಾಸದ ಕಿಚ್ಚುಹೊತ್ತಿಸಿದವರು
ಅಂಬೇಡ್ಕರರು !
ಎಲ್ಲವನು ಧಿಕ್ಕರಿಸಿ
ತುಂಡುಬಟ್ಟೆಯುಟ್ಟು
ನಾನೂ
ನಿಮ್ಮಂತಾಗಬಲ್ಲೆನೆಂದು
ಸಾರಿದವರು ಗಾಂಧಿ !
ಬಡತನದಿಂದೆದ್ದು ಬಂದರೂ
ಪಾಂಡಿತ್ಯ ಪಡೆದು
ಸೂಟು ಬೂಟು ತೊಟ್ಟು
ಹಠ ಚಲವಿದ್ದರೆ
ನೀವು ನನ್ನoತಾಗಬಹುದೆಂದು
ವಿಶ್ವಾಸದ ಕಿಚ್ಚುಹೊತ್ತಿಸಿದವರು
ಅಂಬೇಡ್ಕರರು !
Monday, 10 April 2017
ಸಮುದ್ರ ಮಂಥನ
ದೇವ ದಾನವರ ನಡುವೆ
ನಡೆಯಿತು ಸಮುದ್ರ ಮಂಥನ
ಅಮೃತ, ವಿಷ, ಐಶ್ವರ್ಯ
ಏನೇನೋ ಹುಟ್ಟಿದರೂ
ಅದ್ಯಾಕೋ ನೋಡಿ
' ಕವಿತೆ ' ಮಾತ್ರ ಹುಟ್ಟಲೇ ಇಲ್ಲ !
ಹಾಗೇ ಯೋಚಿಸುತ್ತಿದ್ದಾಗ
ಅನ್ನಿಸಿದ್ದು ಇಷ್ಟು.
ಬುದ್ದಿ ಭಾವಗಳ ತಿಕ್ಕಾಟ
ಹುಲುಮಾನವನ ' ಆಸ್ತಿ '
ದೇವ ದಾನವರಿಂದ
ಅದನು ಬಯಸುತಿರುವುದು
ಆಯಿತೇನೋ ಸ್ವಲ್ಪ ಜಾಸ್ತಿ !
ನಡೆಯಿತು ಸಮುದ್ರ ಮಂಥನ
ಅಮೃತ, ವಿಷ, ಐಶ್ವರ್ಯ
ಏನೇನೋ ಹುಟ್ಟಿದರೂ
ಅದ್ಯಾಕೋ ನೋಡಿ
' ಕವಿತೆ ' ಮಾತ್ರ ಹುಟ್ಟಲೇ ಇಲ್ಲ !
ಹಾಗೇ ಯೋಚಿಸುತ್ತಿದ್ದಾಗ
ಅನ್ನಿಸಿದ್ದು ಇಷ್ಟು.
ಬುದ್ದಿ ಭಾವಗಳ ತಿಕ್ಕಾಟ
ಹುಲುಮಾನವನ ' ಆಸ್ತಿ '
ದೇವ ದಾನವರಿಂದ
ಅದನು ಬಯಸುತಿರುವುದು
ಆಯಿತೇನೋ ಸ್ವಲ್ಪ ಜಾಸ್ತಿ !
Sunday, 9 April 2017
ಪದ್ಯವಾಗಿ !
ಪದಗಳು ಹಗುರಾಗಿ
ಮದ್ಯ ಕುಡಿದು
ತಮ್ಮ ತಮ್ಮ ಜೀವನವನ್ನು
Contemplate
ಮಾಡಿಕೊಳ್ಳುತ್ತಿರುವಾಗ
ತಮಗೇ ಗೊತ್ತಿಲ್ಲದೇ
ಪಾಪ ' ಪದ್ಯಗಳಾದವು' !
ಮದ್ಯ ಕುಡಿದು
ತಮ್ಮ ತಮ್ಮ ಜೀವನವನ್ನು
Contemplate
ಮಾಡಿಕೊಳ್ಳುತ್ತಿರುವಾಗ
ತಮಗೇ ಗೊತ್ತಿಲ್ಲದೇ
ಪಾಪ ' ಪದ್ಯಗಳಾದವು' !
ರೈತ
ಸತ್ತ ದೇಹ
ತಣ್ಣಗಾಗುವುದಂತೆ
ಅದಕ್ಕೆ ಆತ
ಕುಣಿಕೆಯ
ಹುಡುಕುವುದು.
ಒಳಗಣ ಉರಿಯ
ಹೊರಗಣ ಜಗತ್ತು
ಆರಿಸದಿದ್ದರೇನಂತೆ
ಅವನಿಗೆ ಮಾರ್ಗವು
ತಿಳಿದಿಹುದು !
ತಣ್ಣಗಾಗುವುದಂತೆ
ಅದಕ್ಕೆ ಆತ
ಕುಣಿಕೆಯ
ಹುಡುಕುವುದು.
ಒಳಗಣ ಉರಿಯ
ಹೊರಗಣ ಜಗತ್ತು
ಆರಿಸದಿದ್ದರೇನಂತೆ
ಅವನಿಗೆ ಮಾರ್ಗವು
ತಿಳಿದಿಹುದು !
Subscribe to:
Posts (Atom)