Friday, 28 April 2017

http://epaper.vishwavani.news/bng/tshare/bng/23-04-2017/17/Vishwavani-ALL-23042017-1723042017102309.gif
ಗಡ್ಡಕ್ಕೆ ಚೆಡ್ಡಿಗೆ
ಬೆಂಕಿ ಬಿದ್ದಿದೆ
ಮರೆಗುಳಿ ಕನ್ನಡಿಗ
ಎದ್ದಂತಿದೆ !
ಕನ್ನಡಾಭಿಮಾನ
ಮುಗಿಲು ಮುಟ್ಟಲಿದೆ !
ಜನ
ಸ್ವಲ್ಪ ಹರಿದ
ಚಪ್ಪಲಿಯ
ಹೊಲಿಸದಷ್ಟು
ಶ್ರೀಮಂತರಾಗಿ ಬಿಟ್ಟರೆ
ಕಸುಬಿನವ
ಏನು ಮಾಡಬೇಕು ?

Saturday, 22 April 2017

ಏನೆನ್ನಬೇಕು ?

ಗಿಣಿಯನು
ಪಂಜರದೊಳಿಟ್ಟು
ಅನ್ನ ನೀರು
ಕೊಟ್ಟು ಬಿಟ್ಟು
ಧನ್ಯತೆಯ ಅನುಭವಿಸುವವರನು
ಏನೆನ್ನಬೇಕು ?

ಕಣ್ಣುಗಳಿಗೆ
ಬಟ್ಟೆ ಕಟ್ಟಿ
ಕತ್ತಲಲ್ಲಿ
ಓಡ ಬಿಟ್ಟು
ಕೆಟ್ಟ ಸುಖವ
ಸುಖಿಸೊ ಮನವ
ಏನೆನ್ನಬೇಕು ?

ಬೆಳ್ಳಂಬೆಳ್ಗೆ
ವೇಷ ತೊಟ್ಟು
ಒಳಿತು ಕೆಡುಕು
ಗ್ರಹಕೆ ಕೊಟ್ಟು
ಕಾಸು ಮಾಡುವವರ
ಏನೆನ್ನಬೇಕು ?

ಎಲ್ಲದನ್ನೂ
ಕೂಡಿ ಕಳೆದು
ತಾನು ತಿನ್ನಲಷ್ಟೆ ದುಡಿದು
ಮರುಗಲೊಲ್ಲ
ಕೊರಡು ಮನವ
ಏನೆನ್ನಬೇಕು ?

ಕೇಳಿದರೂ ಕೇಳದಂತೆ
ಕಾಣಿಸಿದ್ದೂ ಕಾಣದಂತೆ
ಎದಿರು ಗೊಂಡಾಗ
ಹುಸಿನಗುವ
ವಿದೂಷಕರನು
ಏನೆನ್ನಬೇಕು ?













Friday, 21 April 2017

ಬಿಸಿಲಿಗೆ ತಂಪನೆರೆವ
ಅವಳ ಪ್ರೀತಿ
ಅರೆಕಾಸಿನ ಮಜ್ಜಿಗೆಯ
ಕುಡಿದಂತೆ !

ಅಸಹಾಯಕ ಕವಿ

ಯಾರ ಸಹಾಯವೂ
ಇಲ್ಲದೆಯೇ
ಬದುಕು ಕಟ್ಟಿಕೊಳ್ಳುವ
ಸ್ವಾಭಿಮಾನಿ ಕವಿ,
ಅಸಹಾಯಕ
ಕವನಗಳ ಬರೆದಾಗ
ಸಹೃದಯರ ಸಹಾನುಭೂತಿಗೂ
ಸಂಗಾತಿಯ ಕೆಂಗಣ್ಣಿಗೂ
ಒಮ್ಮೆಗೇ ಗುರಿಯಾಗುತ್ತಾನೆ 😊

Thursday, 20 April 2017

ಅರ್ಥವಿರದ ಕವಿತೆ


ಹಿತ್ತಲಗಿಡ
ಮದ್ದಲ್ಲ
ಪ್ರೊಫೆಸರ್ ಮಕ್ಳು
 ಒದಲ್ಲ !

ಬುದ್ಧಿವಂತರು ಬಾಯಿ
ಬಿಡಲ್ಲ
ದಡ್ದನನ್ನ ಮಕ್ಳು
ಮುಚ್ಚಲ್ಲ !

ಕಮ್ಯುನಿಸ್ಟರು
ಅಳಲ್ಲ
ಕಾರ್ಟೂನಿಷ್ಠರು
ನಗಲ್ಲ !

ಕಾವ್ಯ ಮತ್ತು ಖಡ್ಗ !

ಕಾವ್ಯ ಸೃಷ್ಠಿಯ ಸುಗ್ಗಿ
ಭಾವನೆಗಳ ಸ್ಪುರಣ
ಎಂಬ ಕಾಲವೊಂದಿತ್ತು
ನಂತರ , ಕಾವ್ಯ ಬುದ್ದಿಯ
ವ್ಯಾಕರಣವಾಯ್ತು
ಕಾವ್ಯ ಖಡ್ಗವಾಗಬೇಕು
ಎಂಬ ಮತ್ತೊಂದು ಕಾಲವಿತ್ತು

ಈಗಂತೂ ಕಾವ್ಯ ಚೆನ್ನಾಗಿರಬೇಕು
ಇಲ್ಲ software ಇಂಜಿನಿಯರ್
ಆಗಿರಬೇಕು ಅಂತಾರೆ ನೋಡಿ 😊

ಬಾರಿನ ದೀಪ ಮಂಕು !

ಕುಡುಕನಿಗೇಕೆ
ಲೋಕದ ಕೊಳಕು
ಹೊತ್ತಿರುವಾಗ
ಒಳಗಣ ಬೆಳಕು !

ಅದಕೆ ಏನೋ
ಬಾರಿನ ದೀಪ
ಸದಾ ಮಂಕು !


ಅಸಹಾಯಕ

ಬಿಸಿಲು ಬೆಳಕಿರದಿದ್ದರೆ
ನಿನ್ನ ನೆರಳೂ ನಿನ್ನ
ಹಿಂಬಾಲಿಸುವುದಿಲ್ಲ
ಹೀಗೆ
ಅಸಹಾಯಕ ಕವನಗಳ
ಬರೆವುದರಿಂದ ನನ್ನ
ಪಾರುಮಾಡುವವರಿಲ್ಲ !

ಇನ್ನೊಂದು ಡ್ರಿಂಕು

ಕುಣಿಯಲಾರದವಳಿಗೆ
ನೆಲ ಡೊಂಕು
ನೆಡೆಯೆಲಾರದವನಿಗೆ
ಇನ್ನೊಂದು ಡ್ರಿಂಕು !

Saturday, 15 April 2017

ಅರ್ಧ ಸಮಸ್ಯೆ

ವಿಶ್ವದ
ಅರ್ಧ ಸಮಸ್ಯೆ
ಹಸಿದ ಹೂಟ್ಟೆಯದ್ದು.
ಇನ್ನರ್ಧ
ಉಂಡೂ
ಜೀರ್ಣವಾಗದೆ
ಉಳಿದದ್ದರದ್ದು !

ತೀರದ ತಾಕಲಾಟ

ಸಮುದ್ರದ
ಅಲೆಗಳ ಏರಿಳಿತ
ತೀರದ ತಾಕಲಾಟವಷ್ಟೆ
ಒಮ್ಮೆ ಒಳನುಗ್ಗಿ
ಪಾರಾಗಿಬಿಟ್ಟರೆ
ಕಣ್ಣು ಕೊರೈಸುವಷ್ಟೂ
ಸಾಗರ !
ಮನುಷ್ಯ ಜೀವನವೂ ಹಾಗೆಯೇ !

solve ಎಂಟು !

ಸೈಂಟಿಸ್ಟ್ ಗಳು ಹೇಳುವರು
"ನೀರು ಯುನಿವರ್ಸಲ್" ಸಾಲ್ವೆಂಟು
ಕಾರಣ ಅದು
ಹಲವಾರು ವಸ್ತುಗಳನ್ನು
ಕರಗಿಸುವುದುಂಟು...

ಕುಡುಕನಿಗೆ ಆಲ್ಕೋಹಾಲೇ
"ಅಪರಿಮಿತ ಸಾಲ್ವೆಂಟು" ಏಕೆಂದರೆ ಅವನ ಎಲ್ಲ ನೋವುಗಳನ್ನು ಕರಗಿಸಬಲ್ಲ
ಏಕೈಕ ಶಕ್ತಿ
ಅದಕ್ಕೆ ಮಾತ್ರವೇ ಉಂಟು !

ಕನಸುಗಳು

ನನ್ನ ಕನಸುಗಳ ಕದಿಯಬೇಡ
ಆದರಿಂದ ನಿನಗೇ ನಷ್ಟ.
ಅವುಗಳು ಸಾಕಾರಗೊಳ್ಳುವವರೆಗೂ
ನಿನಗೇ ಅಂಟಿಕೊಳ್ಳೋ ಪ್ರಸವದ ಕಷ್ಟ !

ಅಂಬೇಡ್ಕರರು

ಆಗರ್ಭ ಶ್ರೀಮಂತಿಕೆಯಿದ್ದರೂ
ಎಲ್ಲವನು ಧಿಕ್ಕರಿಸಿ
ತುಂಡುಬಟ್ಟೆಯುಟ್ಟು
ನಾನೂ
ನಿಮ್ಮಂತಾಗಬಲ್ಲೆನೆಂದು
ಸಾರಿದವರು  ಗಾಂಧಿ !

ಬಡತನದಿಂದೆದ್ದು ಬಂದರೂ
ಪಾಂಡಿತ್ಯ ಪಡೆದು
ಸೂಟು ಬೂಟು ತೊಟ್ಟು
ಹಠ ಚಲವಿದ್ದರೆ
ನೀವು ನನ್ನoತಾಗಬಹುದೆಂದು
ವಿಶ್ವಾಸದ ಕಿಚ್ಚುಹೊತ್ತಿಸಿದವರು
ಅಂಬೇಡ್ಕರರು !



Monday, 10 April 2017

ಸಮುದ್ರ ಮಂಥನ

ದೇವ ದಾನವರ ನಡುವೆ
ನಡೆಯಿತು ಸಮುದ್ರ ಮಂಥನ
ಅಮೃತ, ವಿಷ, ಐಶ್ವರ್ಯ
ಏನೇನೋ ಹುಟ್ಟಿದರೂ
ಅದ್ಯಾಕೋ ನೋಡಿ
' ಕವಿತೆ ' ಮಾತ್ರ ಹುಟ್ಟಲೇ ಇಲ್ಲ !

ಹಾಗೇ ಯೋಚಿಸುತ್ತಿದ್ದಾಗ
ಅನ್ನಿಸಿದ್ದು ಇಷ್ಟು.
ಬುದ್ದಿ ಭಾವಗಳ ತಿಕ್ಕಾಟ
ಹುಲುಮಾನವನ ' ಆಸ್ತಿ '
ದೇವ ದಾನವರಿಂದ
ಅದನು ಬಯಸುತಿರುವುದು
ಆಯಿತೇನೋ ಸ್ವಲ್ಪ ಜಾಸ್ತಿ !

Sunday, 9 April 2017

ಪದ್ಯವಾಗಿ !

ಪದಗಳು ಹಗುರಾಗಿ
ಮದ್ಯ ಕುಡಿದು
ತಮ್ಮ ತಮ್ಮ ಜೀವನವನ್ನು
Contemplate
ಮಾಡಿಕೊಳ್ಳುತ್ತಿರುವಾಗ
ತಮಗೇ ಗೊತ್ತಿಲ್ಲದೇ
ಪಾಪ ' ಪದ್ಯಗಳಾದವು' !

ರೈತ

ಸತ್ತ ದೇಹ
ತಣ್ಣಗಾಗುವುದಂತೆ
ಅದಕ್ಕೆ ಆತ
ಕುಣಿಕೆಯ
ಹುಡುಕುವುದು.

ಒಳಗಣ ಉರಿಯ
ಹೊರಗಣ ಜಗತ್ತು
ಆರಿಸದಿದ್ದರೇನಂತೆ
ಅವನಿಗೆ ಮಾರ್ಗವು
ತಿಳಿದಿಹುದು !