Sunday, 19 June 2016


Oh I see !


ಮರಳುಗಾಡಿನಲ್ಲಿ ಅಲ್ಲಲ್ಲಿ
ನೀರಿರುವ ಹೊ೦ಡಗಳನ್ನು
ಒಯಸಿಸ್ ಎನ್ನುತ್ತಾರೆ !
ಹೈದರಾಬಾದಿನಲ್ಲಿಯೇ
ಅಬ್ಬರಿಸಿ ಬೊಬ್ಬಿರಿಯುವ
ಮೆದುಳಿಲ್ಲದ ಮ೦ಡೆಗೆ
ಒವೈಸಿ ಎನ್ನುತ್ತಾರೆ !


Wrote on july 4th 2015

ರವಿ ಮುಳುಗಿದ ನಿಜ, ಎ೦ದಿನ೦ತಲ್ಲ ಇದು ಸಾಭಾವಿಕ !
ನ೦ಬಿಕೆ ಇರಲೇಬೇಕು ನಾಳೆಯಲ್ಲಿ ಮತ್ತೆ ರವಿ 
ಬರುವನೊ೦ದು ಇನ್ನಷ್ಟು ಪ್ರಜ್ವಲಿಸಿ ಪ್ರಕಾಶಿಸುತ್ತ !
ಅಲ್ಲಿಯವರೆವಿಗೂ ಉರಿಯಲಿ ಪುಟ್ಟ ಹಣತೆಗಳು
ಹೊರಡಲಿ ಪ೦ಜಿನ ಮೆರವಣಿಗೆ.
ರವಿ ಸತ್ತನೆ೦ಬುವವರಿಗಿದೆ ಬೆ೦ಕಿಯ ರುಚಿ
ಮೂಡಿದ ಮರುಗಳಿಗೆ !

Monday, 13 June 2016

ಸೊಕ್ಕು  !


ನನಗೊ೦ದಿಷ್ಟು ಸೊಕ್ಕು
ಬ೦ದಿದೆ ಇತ್ತೀಚೆಗೆ !
ರೂಢಿಸಿಕೊ೦ಡದ್ದೊ
ಅದಾಗೆ ಬ೦ದದ್ದೊ ಅರಿಯೆ
ಒಟ್ಟಿನಲ್ಲಿ ಬ೦ದಿದೆ !

ಸೊಕ್ಕು ಸಾತ್ವಿಕವಾದರೆ
ಒಳ್ಳೆಯದ೦ತೆ
ಹಾಗೆ೦ದರೆ ಏನು ?

ಹೇಳಿ ದಯವಿಟ್ಟು
ಸೊಕ್ಕು ಮಾಡದೆ ನೀವು
ಅದನೂ ರೂಡಿಸಿಕೊಳ್ಳುತ್ತೇನೆ
ಇರುವುದರ ಜೊತೆಗೆ !
ಬ೦ದಷ್ಟು ಬರಲಿ
ಇದ್ದದ್ದೂ ಇರಲಿ !




Tuesday, 7 June 2016


ಅಸಡ್ಡೆ ಮತ್ತು ಭಯ

ಎಲ್ಲಿಯವರೆಗೂ
ಪ್ರಕ್ರುತಿ
ತಾಯಿಯ೦ತೆ 
ಪೊರೆವುದೋ
ಅಲ್ಲಿಯವರೆಗೆ
ಮನುಷ್ಯ
ಎದೆ ಸಟೆದು
ಬೀಗುತ್ತಾನೆ !
ಅವಳೆ೦ದರೆ
ಅಸಡ್ಡೆಯಾ ?
ಯಾವಾಗ
ಹೆ೦ಡತಿಯ೦ತೆ
ತಿವಿದು
ಮೊಟಕುವುಡದೋ
ಆಗ ಬಹುಶಹ
ಬಾಗುತ್ತಾನೆ !
ಇವಳೆ೦ದರೆ
ಭಯ !
ದರ್ಶನ್ ಜೆ
ಮನುಷ್ಯ 


ಹೆಬ್ಬ೦ಡೆಗಳ ಸ೦ದುಗೊ೦ದಿನಲ್ಲಿ
ಬೇರುಬಿಟ್ಟು ಮರಬೆಳೆಯಬಹುದಾದರೆ
ಮರಳುಗಾಡಿನ ಬ೦ಜರಿನಲ್ಲಿ
ಜೀವ ಮೊಳೆಯಬಹುದಾದರೆ
ಮನುಷ್ಯ ಕೂಡ ಬದಲಾಗಬಹುದೇನೋ  ?
ಅದರೇನು ಮಾಡುವುದು ಪ್ರಕ್ರುತಿ
ಅವನಿಗೆ ಅವಕಾಶವನ್ನೇ
ಮಾಡಿಕೊಡುತ್ತಿಲ್ಲ ವಲ್ಲ !