Friday, 12 May 2017

ರತ್ನ ಅಲ್ಲ


ಕುಡ್ದಾಗ್ ನಂಗೆ ಏನ್ಮಾಡ್ ತೀರಿ
ನಾಲ್ಗೆ ಒಳ್ಳಾಕಿಲ್ಲ
ಕನ್ನಡ್ ಪದಗಳ್ ನಂಗೂಪ್ರಾಣ
ನಾ ರತ್ನ ಅಲ್ಲ !

ತಪ್ ತಪ್ ಕನ್ನಡ ಮಾತಾಡೋದ್
ಯಾಕ್ ಕಾಟಾಚಾರ ?
ಬಾಯಿಗ್ ಬಂದಂಗ್
ಆಡ್ಬುಟ್ರೆ ಅಮ್ಮುಂಗ್
ಅಪ್ ಚಾರ !

ಕುಡ್ಕ ಅಂತ ನರ್ಕಕ್ ಇಳ್ಸಿ
ಬಾಯ್ ಹೊಲ್ಸಾಕಿದ್ರೂನೆ
ಮೂಗಲ್ ತೀರ್ಥ ಬುಟ್ಕನ್ತೀನಿ
ನನ್ ಮನ್ಸನ್ ನೀ ಕಾಣೆ !
ಮನ್ಸಲ್ ಕನ್ನಡ ಮೆಟ್ಕೊಂದೈತೆ
ಕನ್ನಡಮ್ನಾಣಿ !

ಹಣ್ಣಾದ ಮುದುಕ


ಬರಡಾಗಿದ್ದ  ಭೂಮೀಲಿ
ಸಸಿಗಳ ನೆಟ್ಟ
ನೀರ ತಂದು ಹಾಯಿಸಿ
ಮರಗಳ ಕನಸ ಕಂಡ !

ನಕ್ಕರು ಹಲವರು
ತಿಕ್ಕಲೆಂದರು ಕೆಲವರು
ಇಲ್ಲದ ನೀರ
ತಂದು ಹಾಯಿಸಿ
ಮನೆಹಾಳು
ಮಾಡುತ್ತಿರುವನೆಂದರು
ಬಹಳರು !
ಆದರೂ ಅವನು
ಮರಗಳ ಕನಸ ಬಿಡಲಿಲ್ಲ .

ವರ್ಷಗಳು ಉರುಳಲು
ಮರಗಳು ಕಾಡಾದವು
ಬರಡು ಭೂಮಿಯಲ್ಲಿ
ನೀರು ನಿಂತಿತು
ಹಕ್ಕಿಗಳು ಬಂದವು
ಭಾವಿ ತುಂಬಿದವು
ಗಾಳಿ ತಂಪಾಯ್ತು....

ಈಗ ಜನ ಹಾಯಾಗಿದ್ದಾರೆ
ಎಲ್ಲವನು ಊರ ದೇವರಿಗೆ
ಆರೋಪಿಸಿ , ದೇವಳದ ಮೇಲೆ
ಗೋಪುರವ ಕಟ್ಟಿಸಿ !

ಸಸಿ ನೆಟ್ಟವನು ಈಗ
ಮುದುಕನಾಗಿದ್ದಾನೆ
ಬೆಟ್ಟದ ತಡಿಯ
ಗುಡಿಸಲಲ್ಲಿ ಸದಾ
ಮಲಗಿರುತ್ತಾನೆ !
ನಿದ್ದೆಯಲ್ಲೂ ಮರಳುಗಾಡ
ಕನವರಿಸುತ್ತಿರುತ್ತಾನೆ !

Sunday, 7 May 2017

' ದಾರ '

ಸಣ್ಣ ಕಥೆಗಳು
ಬರಹಗಾರನ
ಆತ್ಮಕಥೆಯ
ತುಕಡಿಗಳು !

ಬಾವಿ ನೀರು
ಅವನದ್ದು
ಬಿಂದಿಗೆ ಶ್ರಮ
ನಮ್ಮದು

' ದಾರ '
ಕಥೆ ಪುಸ್ತಕ !