Tuesday, 15 November 2016

ರೈತ  ಮತ್ತು  ಕುಣಿಕೆ !

ಒಂದು ಹದ ಮಳೆ ಹೊಯ್ದ ಬೆನ್ನಲೇ
ಹೂಡುವನು ರೈತ ನೇಗಿಲನು
ಗೇಯುವೆನು ನೆಲವ ತದೇಕಚಿತ್ತದಲಿ
ಮುಂದೊಂದು ದಿನದ ಹಸಿರು
ಸುಳಿದಾಡಲು ಕಣ್ಮನಗಳಲಿ !

ಮಳೆಬಾರದಿದ್ದರೆ ? ನೆಲಅರಳದಿದ್ದರೆ ?
ಆದರೆ ಹೋದರೆಂದು ಚಿಂತಿಸದೆ
ಹೂಡುವನು ನೇಗಿಲನು
ಬೆವರ  ಹರಿಸಿ.

ಕಂಗೊಳಿಸೆ ಹಸಿರು
ತೆನೆತೂಗಿಯಾಡಲು
ನಮಿಸುವನು ಜೀವಜಾತೆಗೆ
ಉಣಿಸುವನು ಕುಲ ಕೋಟಿಗೆ !

ಯಾರಮುನಿಸಿಗೋ
ಒಂದೊಮ್ಮೆ  ಅರಳದಿದ್ದರೆ ಹಸಿರು
ಖಾಯುವನು ತಾ ತನ್ನೊಳಗೆ !

ಎಷ್ಟು ಮಳೆಹೊಯ್ದರೂ
ತಣ್ಣಗಾಗದ " ಖಾವು "
ಸುಡುವುದು ಸುತ್ತಲಿನವರನೂ !

ಮಳೆಬಾರದಿದ್ದರೇನಂತೆ
ಅಡಗಲಾರದೆ  ನೋವು ?
ಮರುಗುತಲಿ ಹುಡುಕುವನು
ಕುಣಿಕೆಯನು !




No comments:

Post a Comment