Saturday, 5 March 2016


ಮಂಕುತಿಮ್ಮನ ಮಾಡಿದರು !

ಹೌದುರಿ 
ಇವರು ಲೀಡರು 
ರೈತಚಳುವಳಿಯಿಂದ  
ಬಂದವರು 
ಉಳುಮೆ ಬಿಟ್ಟವರು
ಚಳುವಳಿಗೆ ಕೈ ಕೊಟ್ಟರು  !

ಮತ್ತಿವರು  
ಲೋಹಿಯಾರ 
ಹೆಸರೇಳಿ 
ಬಂದರು ದುಂದು 
ವೆಚ್ಚ ಮಾಡಿದರು
ಸಬೂಬು ಕೊಟ್ಟರು  !

ಇನ್ನಿವರು 
ಜಮೀನುಧಾರರ 
ವಿರೋಧಿಸಿದವರು 
ತಾವೇ ಆಯಕಟ್ಟಿನಲ್ಲಿ 
ಜಮೀನು ಮಾಡಿ 
ಮಾರಿದರು !

ಮತ್ತವರು 
ಧಾರ್ಮಿಕರು 
ಗುಡಿಯ ಕೆಡವಿದರು 
ಮಸೀದಿಯ ಒಡೆದರು 
ಇಗರ್ಜಿಗೆ ಕಲ್ಲು ಎಸೆದರು !

ಇನ್ನು "ಈಗಿನವರು" 
ಮೆಲಿನವರನೆಲ್ಲ 
ತೆಗಳಿ ನಮ್ಮನ್ನು 
ಮಂಕುತಿಮ್ಮರನ್ನಾಗಿ 
ಮಾಡುವವರು ! 


 


No comments:

Post a Comment