ಹೌದುರಿ
ಇವರು ಲೀಡರು
ರೈತಚಳುವಳಿಯಿಂದ
ಬಂದವರು
ಉಳುಮೆ ಬಿಟ್ಟವರು
ಚಳುವಳಿಗೆ ಕೈ ಕೊಟ್ಟರು !
ಮತ್ತಿವರು
ಲೋಹಿಯಾರ
ಹೆಸರೇಳಿ
ಬಂದರು ದುಂದು
ವೆಚ್ಚ ಮಾಡಿದರು
ಸಬೂಬು ಕೊಟ್ಟರು !
ಇನ್ನಿವರು
ಜಮೀನುಧಾರರ
ವಿರೋಧಿಸಿದವರು
ತಾವೇ ಆಯಕಟ್ಟಿನಲ್ಲಿ
ಜಮೀನು ಮಾಡಿ
ಮಾರಿದರು !
ಮತ್ತವರು
ಧಾರ್ಮಿಕರು
ಗುಡಿಯ ಕೆಡವಿದರು
ಮಸೀದಿಯ ಒಡೆದರು
ಇಗರ್ಜಿಗೆ ಕಲ್ಲು ಎಸೆದರು !
ಇನ್ನು "ಈಗಿನವರು"
ಮೆಲಿನವರನೆಲ್ಲ
ತೆಗಳಿ ನಮ್ಮನ್ನು
ಮಂಕುತಿಮ್ಮರನ್ನಾಗಿ
ಮಾಡುವವರು !
No comments:
Post a Comment