Monday, 14 March 2016

ತುಂಬೆ ಗಿಡಗಳ ಊರು


ನಮ್ಮೂರೆ೦ದರೆ
ಕಲ್ಪತರುಗಳ ಊರು
ಸಿದ್ದಗಂಗೆಯ ತೇರು
ಕಲಾವಿದರ ತವರು !

ನಮ್ಮೂರೆ೦ದರೆ
ತ್ರಿವಿದ ದಾಸೋಹಿ
ಮಹಾಭಿಕ್ಷು
ದೊದ್ದಬುದ್ದೇರು.

ನಮ್ಮೂರೆ೦ದರೆ
ಕಾಡು ಕುರುಚಲು
ಬಯಲು ಸೀಮೆಗೆ 
ಹೆಬ್ಬಾಗಿಲು !

ನಮ್ಮೂರೆ೦ದರೆ
ಕಲ್ಲು ಬಂಡೆಗಳಿಗೆ
ಜೀವ ಕೊಟ್ಟ
ಡ೦ಕಣ ಚಕಣರು !

ನಮ್ಮೂರೆ೦ದರೆ
ಅಣುವಿನಲ್ಲಿ ಪ್ರಖಾಂಡ
ಶಕ್ತಿಯನು  ಕಂಡ
ರಾಜಾ ರಾಮಣ್ಣರು !

ನಮ್ಮೂರೆ೦ದರೆ
ಆನೆ ಕುದುರೆಯ
ರಂಗಕ್ಕೆ ಪರಿಚಯಿಸಿದ
ಗುಬ್ಬಿ ವೀರಣ್ಣೊರು !

ಅಷ್ಟೇ ಅಲ್ಲ ಇರಿ
ನಮ್ಮೂರೆ೦ದರೆ
ಹೊಗೆಯಾಡುವ ತಟ್ಟೆ ಇಡ್ಲಿ
ತುಪ್ಪದ ರಾಗಿ ಬಿಸ್ಕೇಟು
ಅಕ್ಕಿ ರೊಟ್ಟಿ ಅವರೇಕಾಯಿ ಉಸ್ಲಿ !

ನಮ್ಮೂರೆ೦ದರೆ
ಕಲ್ಪತರುಗಳ ಊರು
ಸಿದ್ದಗಂಗೆಯ ತೇರು
ಕಲಾವಿದರ ತವರು !














No comments:

Post a Comment