Sunday, 10 September 2017

ಧೈರ್ಯ ತಂದುಕೋ !

ನಾನು ಬೀದಿ ಬದಿಯಲ್ಲಿ
ನಿಂತ ಕನ್ನಡಿ
ಹಾದುಹೋಗುವುದನ್ನು
ಪ್ರತಿಫಲಿಸುವುದಷ್ಟೇ ಕೆಲಸ

ದನ ನನ್ನ ಬಳಿ ಬಂದು ಮೈಉಜ್ಜಿದೆ
ನಾಯಿ ಕಾಲೆತ್ತಿ ಉಚ್ಚೆ ಹೊಯ್ದಿದೆ
ಮೋಟಾರು ಕಪ್ಪನೆಯ ಹೊಗೆ ಉಗುಳಿ
ಕೊಚ್ಚೆ ಸಿಡಿಸಿದೆ.......

ಇದೆಲ್ಲಾ ಅವಿರತ ನೆಡೆದು
ನನ್ನ ಮೇಲೂ ಗೀರು ಗಾರು
ಕಲೆ ನೂರಾರು
ಅದೇಕೋ ನೀನು ಮಾತ್ರ ಎಲ್ಲ
ಓರೆ ಕೋರೆಗೂ ನನ್ನನ್ನಷ್ಟೇ ದೂಷಿಸಿದೆ

ನೀನಿದ್ದದ್ದೇ ಕಪ್ಪು ವಿಕಾರ
ನಾನೇನು ಮಾಡಲಿ ?
ಅದೇ ಕಂಡಿತು ನನ್ನಲ್ಲಿ
ಹಿಡಿಸದೆ ನನ್ನನ್ನೇ
"ಧ್ವ೦ಸ " ಗೊಳಿಸಿದೆ ನೀನು
ಕೆಳಗೆ ಬಿದ್ದ ನಾನು ಸಹಸ್ರ ಚೂರು !

ಒಂದೊಂದು ಚೂರಿನಲ್ಲೂ
ನಿನ್ನ ವಿಕೃತಿ ಪ್ರತಿಫಲಿಸತೊಡಗಿದೆ
ಭಯವಾಗಿತ್ತಿದೆಯಾ  ?
ಕನ್ನಡಿಯಲ್ಲಿನ ಪ್ರತಿಫಲನ
ಜಗದ ನಿಯಮ ಸ್ವಲ್ಪ
ಧೈರ್ಯ ತಂದುಕೋ !

ದರ್ಶನ್ ಜೆ









No comments:

Post a Comment