Monday, 10 April 2017

ಸಮುದ್ರ ಮಂಥನ

ದೇವ ದಾನವರ ನಡುವೆ
ನಡೆಯಿತು ಸಮುದ್ರ ಮಂಥನ
ಅಮೃತ, ವಿಷ, ಐಶ್ವರ್ಯ
ಏನೇನೋ ಹುಟ್ಟಿದರೂ
ಅದ್ಯಾಕೋ ನೋಡಿ
' ಕವಿತೆ ' ಮಾತ್ರ ಹುಟ್ಟಲೇ ಇಲ್ಲ !

ಹಾಗೇ ಯೋಚಿಸುತ್ತಿದ್ದಾಗ
ಅನ್ನಿಸಿದ್ದು ಇಷ್ಟು.
ಬುದ್ದಿ ಭಾವಗಳ ತಿಕ್ಕಾಟ
ಹುಲುಮಾನವನ ' ಆಸ್ತಿ '
ದೇವ ದಾನವರಿಂದ
ಅದನು ಬಯಸುತಿರುವುದು
ಆಯಿತೇನೋ ಸ್ವಲ್ಪ ಜಾಸ್ತಿ !

No comments:

Post a Comment